ಸಾಮಾನ್ಯವಾಗಿ ಪ್ರತಿಯೊಬ್ಬ ಯುವಕರೂ ನಾನು ಫಾರಿನ್ ಗೆ ಹೋದರೆ ಕೈತುಂಬಾ ಕಾಸು ಸಂಪಾದಿಸಬಹುದು. ವೈಭವದ ಜೀವನ ಸಾಗಿಸಬಹುದು ಎಂಬ ಕನಸು ಕಾಣುತ್ತಾರೆ. ಅದೇಥರ ನಾಯಕ ಪುರುಷೋತ್ತಮನಿಗೆ ದುಬೈಗೆ ಹೋಗುವ ಕನಸು. ಆ ಕನಸನ್ನು ನನಸು ಮಾಡಿಕೊಳ್ಳಲು ಸಾಧ್ಯವಾಯಿತೇ,ಆ ಹಾದಿಯಲ್ಲಿ ಆತ ಎದುರಿಸಿದ ತೊಂದರೆ, ತೊಡಕುಗಳೇನು ಎಂಬುದನ್ನು ಹೇಳುವ ಚಿತ್ರವೇ ಪುರುಷೋತ್ತಮನ ಪ್ರಸಂಗ. ದೂರದ ಬೆಟ್ಟ ನುಣ್ಣಗೆ, ಹತ್ತಿರ ಹೋಗಿ ನೋಡಿದಾಗಲೇ ಅದರಲ್ಲಿರುವ ಕಲ್ಲು ಮುಳ್ಳು ಕಾಣುವುದು ಎನ್ನುವಂತೆ ಪುರುಷೋತ್ತಮ .
ದುಬೈಗೆ ಹೋದ ಮೇಲೆಯೇ ಅದರ ಹಿಂದಿರುವ ನಗ್ನ ಸತ್ಯದ ಅರಿವಾಗುತ್ತದೆ. ಪೋಷಕರನ್ನು ಸುಖವಾಗಿ ಸಾಕಬೇಕು, ಗೆಳತಿಯ ಜೊತೆ ಸಖೀ ಜೀವನ ನಡೆಸಬೇಕೆಂಬ ಕನಸು ಕಂಡ ಯುವಕನ ಜೀವನದಲ್ಲಿ ಏನೇನೆಲ್ಲ ನಡೆಯಿತು,
ತಂದೆ, ತಾಯಿ ಜೊತೆ ನೆಮ್ಮದಿಯಿಂದಿದ್ದ ಪುರುಷೋತ್ತಮ (ಅಜಯ್ ಪೃಥ್ವಿ). ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದರೂ, ದುಬೈಗೆ ಹೋಗಿ ಲಕ್ಷ ಲಕ್ಷ ಸಂಪಾದಿಸಬೇಕೆನ್ನುವುದು ಆತನ ಗುರಿಯಾಗಿರುತ್ತದೆ. ಈ ನಡುವೆ ಪುರುಷೋತ್ತಮನ ಬಾಲ್ಯದ ಗೆಳತಿ, ಬ್ಯಾಂಕ್ ಒಂದರಲ್ಲಿ ಕೆಲಸ ಮಾಡುತ್ತಿರುವ ಆತ್ಮಿಕಾ (ರಿಷಿಕಾ ನಾಯಕ್) ಇಬ್ಬರೂ ಮದುವೆಯಾಗುವ ಆಲೋಚನೆಯಲ್ಲಿದ್ದರೂ ದುಬೈಗೆ ಹೋಗಿ ಹಣ ಸಂಪಾದಿಸಿದ ನಂತರ ಮದುವೆಯಾಗುವ ಆಲೋಚನೆ ಪುರುಷೋತ್ತಮನದು, ಪುರುಷೋತ್ತಮನ ಗೆಳೆಯ ವರುಣ್ (ವಿಜಯ್ ಶೋಬರಾಜ್) ತನ್ನ ಚಿಕ್ಕಪ್ಪ ದುಬೈನಲ್ಲಿದ್ದಾರೆ ಕೆಲಸ ಸಿಗುತ್ತೆ ಎಂದು ಆತನನ್ನು ದುಬೈಗೆ ಕಳಿಸಲು ಏಜೆಂಟ್ (ನವೀನ್. ಡಿ. ಪಡಿಲ್) ಮೂಲಕ ಪಾಸ್ಪೋರ್ಟ್, ವಿಸಾ ಮಾಡಿಸಿಕೊಡಲು ಮುಂದಾಗುತ್ತಾನೆ. ಅದಕ್ಕೆ ತಗುಲುವ ಏಳು ಲಕ್ಷ ಹಣಕ್ಕಾಗಿ ಪರದಡುತ್ತಿದ್ದ. ಮಗನಿಗೆ ಮಗಳ ಮದುವೆಗೆ ಇಟ್ಟಿದ್ದ ಹಣವನ್ನೇ ತಂದೆ ನೀಡುತ್ತಾನೆ. ಅಂತೂ ಇಂತೂ ದುಬೈಗೆ ಹಾರಿದ ಪುರುಷೋತ್ತಮನ ಬದುಕಿನಲ್ಲಿ ಎದುರಾಗುವ ತಿರುವುಗಳು ದೊಡ್ಡ ಪಾಠವನ್ನೇ ಹೇಳಿಕೊಡುತ್ತದೆ.
ನಾಯಕವ ಅಜಯ್ ಪೃಥ್ವಿ ಮಂಗಳೂರು ಭಾಷೆಯ ಸೊಗಡಿನ. ಪುರುಷೋತ್ತಮನ ಪಾತ್ರಕ್ಕೆ ನ್ಯಾಯ ಒದಗಿಸಿ ತಮ್ಮ ನಟನಾ ಸಾಮರ್ಥ್ಯವನ್ನು ತೋರಿಸಿದ್ದಾರೆ. ಅದೇ ರೀತಿ ನಟಿ ರಿಷಿಕಾ ನಾಯಕ್ ಸಿಕ್ಕ ಅವಕಾಶದಲ್ಲಿ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಅದೇ ರೀತಿ ತಮ್ಮ ಮಾತಿನ ಶೈಲಿಯಲ್ಲಿ ನಗೆ ಚಟಾಕಿ ಹಾರಿಸಿದ ನವೀನ್.ಡಿ. ಪಡಿಲ್ , ಅರವಿಂದ್ ಬೋಳಾರ್ , ದೇವದಾಸ್ ಕಾಫಿಕಾಡ್ ಹಾಗೂ ಗೆಳೆಯನ ಪಾತ್ರ ಮಾಡಿರುವ ವಿಜಯ್ ಶೋಬರಾಜ್ ಸೇರಿದಂತೆ ಎಲ್ಲರೂ ಚಿತ್ರದ ಓಟಕ್ಕೆ ಉತ್ತಮ ಸಾತ್ ನೀಡಿದ್ದಾರೆ. ನಿರ್ದೇಶಕ ದೇವದಾಸ್ ಕಾಪಿಕಾಡ್ ದುಬೈ ಆಸೆಹೊತ್ತ ಹುಡುಗನ ಬದುಕಲ್ಲಿ ಎದುರಾಗುವ ಸಂಕಷ್ಟಗಳು, ನಲಿವನ್ನ ಹಾಸ್ಯ ಮಿಶ್ರಿತ ಕಥೆಯೊಂದಿಗೆ ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಾರೆ. ಚಿತ್ರದ ಹಿನ್ನೆಲೆ ಸಂಗೀತ ಉತ್ತಮವಾಗಿದೆ. ಅದೇ ರೀತಿ ಛಾಯಾಗ್ರಹಕರ ಕೆಲಸ ಗಮನ ಸೆಳೆಯುವಂತಿದೆ.